ಹುಬ್ಬಳ್ಳಿ-ಧಾರವಾಡ ಸುದ್ದಿ

ಕಮಲ ಹಿಡಿದ ಕೈ ಮುಖಂಡ ಆಜೂರ

ಶಿಗ್ಗಾವಿ: ಶಿಗ್ಗಾವಿ ಕಾಂಗ್ರೇಸ್ ಪಕ್ಷದ ಹಾಲಿ ಕಾರ್ಯಾಧ್ಯಕ್ಷ ವೀರೇಶ ಆಜೂರ ಅವರು ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ಬೆಂಬಲಿಗ ರೊಂದಿಗೆ ಬಿಜೆಪಿ  ಕಮಲದ ಧ್ವ್ವಜ ಹಿಡಿಯುವ ಮೂಲಕ ಸೇರ್ಪಡೆಯಾದರು.
ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಬೊಮ್ಮಾಯಿ, ವಿರೇಶ ಅಜೂರ ಅವರು ನಮ್ಮ ಪಕ್ಷದವರೇ ಬಿಜೆಪಿ ಅವಕಾಶವನ್ನು ನೀಡದಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು, ಈಗ ಮರಳಿ ಬಿಜೆಪಿಗೆ ಬಂದಿದ್ದಾರೆ, ನಮ್ಮವರೇ ನಮ್ಮ ಮನೆಗೆ ಮರಳಿ ಬಂದಿರುವದು ಸಂತಸ ತಂದಿದೆ ಎಂದರು.
ಪಕ್ಷಕ್ಕೆ ಸೇರ್ಪಡೆಗೊಂಡ ಹಾಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ವಿರೇಶ ಅಜೂರ ಮಾತನಾಡಿ ಪಕ್ಷ ಸಂಘಟನೆಯ ಜೊತೆಗೆ ಜನ ಸೇವೆಗೆ ಬೊಮ್ಮಾಯಿವರ ಜೊತೆ ಕೈ ಜೊಡಿಸುತ್ತೆನೆ ಅವರ ಅಭಿಮಾನದೊಂದಿಗೆ ಅವರ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡರಾದ ಉಮೇಶ ಅಂಗಡಿ, ಶ್ರೀಕಾಂತ ಬುಳ್ಳಕ್ಕನವರ, ಮಂಜುನಾಥ ಬ್ಯಾಹಟ್ಟಿ, ಎಸ್.ಕೆ.ಅಕ್ಕಿ, ಶಿವಪ್ರಸಾದ ಸುರಗೀಮಠ, ರೇಣುಕನಗೌಡ ಪಾಟೀಲ, ಶಿವರಾಜ ರಾಯಣ್ಣವರ ಸೇರಿ ದಂತೆ ಪಕ್ಷದ ಮುಖಂಡರು ಇದ್ದರು.

administrator

Related Articles

Leave a Reply

Your email address will not be published. Required fields are marked *