ಹುಬ್ಬಳ್ಳಿ-ಧಾರವಾಡ ಸುದ್ದಿ
ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಮಾನೆ

ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಮಾನೆ

ಮುಂಡಗೋಡ: ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಗುರುವಾರ ಹಾನಗಲ್ ತಾಲೂಕ ರೈತರ ಜೀವನಾಡಿಯಾಗಿರುವ ಮುಂಡಗೋಡ ತಾಲೂಕಿನ ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ತಮ್ಮ ಅಪಾರ ಅಭಿಮಾನಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರೊಡನೆ ಬೆಳಗ್ಗೆ ಹಾನಗಲ್ ನಗರದ ಕುಮಾರೇಶ್ವರ ವಿರಕ್ತಮಠದಿಂದ ನೂರಾರು ಟ್ರಾö್ಯಕ್ಟರ್ ಮೂಲಕ ಹೊರಟು ಮಧ್ಯಾಹ್ನ ಮುಂಡಗೋಡಗೆ ಆಗಮಿಸಿ ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಸದಸ್ಯರೊಂದಿಗೆ ಜತೆಗೂಡಿ ಬಾಗಿನ ಅರ್ಪಿಸಿದರು. ಅಪಾರ ಜನಸ್ತೋಮ ಸೇರಿದ ಜನ ಮಾನೆಯವರ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.
ಹಾನಗಲ್ ಬ್ಲಾಕ್ ಅಧ್ಯಕ್ಷ ಆರ್.ಎಸ್. ಪಾಟೀಲ, ಅಕ್ಕಿಆಲೂರ ಕಾಂಗ್ರೆಸ್ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಜಿ.ಪಂ ಮಾಜಿ ಸದಸ್ಯ ತಾತನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಖುರ್ಶೀದ ಹುಲ್ಲತ್ತಿ, ಉಪಾಧ್ಯಕ್ಷ ಮಹೇಶ ಪವಾಡಿ, ತಾ.ಪಂ ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಶಾಂತಕ್ಕಾ ಅಂಗಡಿ, ರಾಜೇಂದ್ರ ಬಾರ್ಕಿ, ವೀರೇಶ ಬೈಲ್ವಾಳ, ಸೋಮನಾಥ ಚೌವ್ಹಾಣ, ಮಾರುತಿ ಕಮಾಟಿ, ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಎಚ್.ಎಮ್. ನಾಯಕ್, ಪ.ಪಂ ಸದಸ್ಯರಾದ ಮಹ್ಮದಗೌಸ ಮಕಾನದಾರ, ರಜಾ ಪಠಾಣ, ತಾಲೂಕ ಪ್ರಧಾನ ಕಾರ್ಯ ದರ್ಶಿ ಧರ್ಮರಾಜ ನಡಿಗೇರ, ರಾಜೂ ಬೋವಿ ಮುಂತಾದವರಿದ್ದರು.

 

administrator

Related Articles

Leave a Reply

Your email address will not be published. Required fields are marked *