ಹುಬ್ಬಳ್ಳಿ-ಧಾರವಾಡ ಸುದ್ದಿ
ರೌಡಿಶೀಟರ್ ನವೀನ ನಲವಡಿ ಅಂದರ್

ರೌಡಿಶೀಟರ್ ನವೀನ ನಲವಡಿ ಅಂದರ್

ಜಗಳ ಬಿಡಿಸಲು ಹೋದ ಮುಕ್ತುಮಸಾಬ ಸಕಲಿ ಮೇಲೆ ಹಲ್ಲೆ

ಧಾರವಾಡ ಹೊಸಬಸ್ ನಿಲ್ದಾಣ ಬಳಿ ಗಲಾಟೆ

ಧಾರವಾಡ: ನಗರದ ಹೊಸ ಬಸ್ ನಿಲ್ದಾಣ ಬಳಿ ಇಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ರೌಡಿಶೀಟರ್ ನವೀನ ಶಲವಡಿ ಇತರರು ಚಹಾ ಅಂಗಡಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಆಟೋ ಚಾಲಕ ಮುಕ್ತುಮಸಾಬ ಸಕಲಿ ಜಗಳ ಬಿಡಿಸಲು ಹೋದಾಗ ಆತನಿಗೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ.


ಇದರಿಂದ ಮುಕ್ತುಂಮಸಾಬ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತಲೆಗೆ ಹದಿನೇಳು ಹೊಲಿಗೆ ಬಿದ್ದಿವೆ. ನವೀನ ಮೇಲೆ ಈಗಾಗಲೇ ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಓಪನ್ ಆಗಿದ್ದು, ಪುಂಡಾಟಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲವಾಗಿತ್ತು. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಗಲಾಟೆ ಮಾಡಿ ಮೂರನೇ ಗಲಾಟೆಯಲ್ಲಿ ಸಿಕ್ಕು ಬಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಇದೀಗ ಚಿಗುರಿಯೊಡೆಯುತ್ತಿರುವ ಇಂತಹ ಖದೀಮರ ಪುಂಡಾಟಕ್ಕೆ ಬ್ರೇಕ್ ಹಾಕಬೇಕಿದೆ.

 

administrator

Related Articles

Leave a Reply

Your email address will not be published. Required fields are marked *