ಹುಬ್ಬಳ್ಳಿ-ಧಾರವಾಡ ಸುದ್ದಿ
ವಾರಿಯರ್ಸಗೆ ಜೈನ ಸಮುದಾಯದ ನೆರವು

ವಾರಿಯರ್ಸಗೆ ಜೈನ ಸಮುದಾಯದ ನೆರವು

ಕುಂದಗೋಳ: ಪಟ್ಟಣದ ಶಾಲೆಯಲ್ಲಿ ಮಹಾವೀರ ಇಂಟರ್‍ನ್ಯಾಷನಲ್ ಜೈನ್ ಸಮುದಾಯದ ಸಹಯೋಗದಲ್ಲಿ ಕೋವಿಡ ನಿಯಂತ್ರಣಕ್ಕಾಗಿ ಶ್ರಮಿಸಿದವರ ಕುಟುಂಬದವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕಿ ಕುಸುಮಾವತಿ ಶಿವಳ್ಳಿ ಚಾಲನೆ ನೀಡಿದರು.
ಸಮಾಜ ಸೇವಕ ಮಹೇಂದ್ರ ಸಿಂಘಿ ಅವರು ಆಶಾ ಕಾರ್ಯಕರ್ತರಿಗೆ, ಡಿ ದರ್ಜೆ ವೈದ್ಯಕೀಯ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಸಂಘಟಿಕರು ಕೋವಿಡ್ ನಿಯಂತ್ರಣಕ್ಕಾಗಿ ಸರಕಾರದ ಮಾರ್ಗಸೂಚಿಯಂತೆ ಶ್ರಮಿಸಿದ್ದು ಸಮುದಾಯವು ಕಷ್ಟಕಾಲದಲ್ಲಿದ್ದಾಗ ಈ ಸಂಸ್ಥೆಯ ಮೂಲಕ ಕೈಲಾದಷ್ಟು ಸಮಾಜ ಸೇವೆ ಮಾಡುತ್ತ ಬಂದಿದ್ದೇವೆ ಎಂದು ಹೇಳಿದರು.
ತಹಶೀಲ್ದಾರ ಬಸವರಾಜ ತೆನ್ನಳ್ಳಿ, ಗ್ರೇಡ್-2 ತಹಶೀಲ್ದಾರ ಬಸವರಾಜ ಮುಳಗುಂದಮಠ, ಪ್ರಕಾಶ ಬಾಪಣಾ, ಮಗರಾಜ ಜೈನ್, ಅನೀಲ ಜೈನ್, ದಿನೇಶ ಜೈನ್, ಸುಬಾಷ ಡಂಕ,ಪ್ರಕಾಶ ಜೈನ್, ಕೇಸರಿಚಂದ, ಕಾಂಗ್ರೆಸ್ ಮುಖಂಡರಾದ ರಮೇಶ ಕೊಪ್ಪದ, ಸಲೀಂ ಕ್ಯಾಲಕೊಂಡ ಸೇರಿದಂತೆ ಅನೇಕರಿದ್ದರು.

 

administrator

Related Articles

Leave a Reply

Your email address will not be published. Required fields are marked *