ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡದಲ್ಲಿ ಮತ್ತೊಂದು ಕೊಲೆ : ಆರೋಪಿ ವಶಕ್ಕೆ

ಹೊಟೆಲ್ ಕುಕ್‌ನ ಹತ್ಯೆ ಮಾಡಿದ ಸಪ್ಲಾಯರ್

ಧಾರವಾಡ: ನಗರದ ಸಂಗಮ್ ಸರ್ಕಲ್ ವಿಮಲ್ ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಅದೇ ಹೊಟೇಲ್‌ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದವ ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿರುವ ಪ್ರಕರಣ ಇಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.


ವಿಮಲ್ ಹೊಟೇಲ್‌ನ ಕೆಲಸಗಾರರು ಇರುವ ಕೋಣೆಯಲ್ಲಿ ಈ ಅವಘಡ ನಡೆದಿದೆ. ಹತ್ಯೆಗೀಡಾದವನು ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದ ಫಕೀರೇಶ ಪ್ಯಾಟಿ ಆಗಿದ್ದು, ತಮಿಳುನಾಡು ಮೂಲದ ಕನೈಯಪ್ಪ ಕನಯ್ಯ ಕೆ ಕಬ್ಬಿಣದ ಸಲಾಖೆಯಿಂದ ಹೊಡೆದವನಾಗಿದ್ದಾನೆ. ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಧಾರವಾಡದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ದಿನಕ್ಕೊಂದರಂತೆ ನಾಲ್ಕು ಕೊಲೆಗಳು ನಡೆದಿದೆ.


ರವಿವಾರ ರಾತ್ರಿ ಯಾಲಕ್ಕಿಶೆಟ್ಟರ್ ಕಾಲನಿಯ ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿ, ಸೋಮವಾರ ರಾತ್ರಿ ಕರ್ನಾಟಕ ವಿಶ್ವವಿದ್ಯಾಲಯದ ಓಂ ಮಠದ ರಸ್ತೆಯಲ್ಲಿ ಮತ್ತೊಂದು ಕೊಲೆಯಾಗಿತ್ತು. ನಿನ್ನೆ ನವಲೂರು ಗ್ರಾಮದಲ್ಲಿ ಮತ್ತೊಂದು ಕೊಲೆಯಾಗಿದೆ. ಈ ಮೂರೂ ಕೊಲೆಗಳು ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ನಡೆದರೆ ಇಂದು ಬೆಳಗಿನ ಜಾವ ಶಹರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 

 

administrator

Related Articles

Leave a Reply

Your email address will not be published. Required fields are marked *