ಹುಬ್ಬಳ್ಳಿ-ಧಾರವಾಡ ಸುದ್ದಿ
ಸೆಸ್ಪೆನ್ಸ್ ’ಕಾಕ್ಟೈಲ್’ಗೆ ಮುಹೂರ್ತ

ಸೆಸ್ಪೆನ್ಸ್ ’ಕಾಕ್ಟೈಲ್’ಗೆ ಮುಹೂರ್ತ

’ಕಾಕ್ಟೈಲ್’ ಎಂದರೆ ತಕ್ಷಣ ಪಾನಿಯ ನೆನಪಿಗೆ ಬರುತ್ತದೆ. ಆದರೆ ಇದು ಪಾನಿಯ ಅಲ್ಲ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪ್ರಸ್ತುತ ದಿನಗಳ ಸಂದರ್ಭದ ಅಂಶಗಳ ಕುರಿತಾದ ಚಿತ್ರದ ಕಥೆಗೆ ಇದೇ ಹೆಸರನ್ನು ಇಡಲಾಗಿದೆ. ಈ ಚಿತ್ರಕ್ಕೆ ಕಳೆದ ಬುಧವಾರ ಬೆಂಗಳೂರಿನ ರಾಜಾಜಿನಗರದ ವರಸಿದ್ದಿ ವಿನಾಯಕನ ಸನ್ನಿದಿಯಲ್ಲಿ ಮುಹೂರ್ತ ಸಮಾರಂಭವು ಸರಳವಾಗಿ ನಡೆದಿದೆ. ’ವಿ.ಮೈನಸ್’ ಮತ್ತು ’ಸುವ್ವಾಲಿ’ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಶ್ರೀರಾಮ್ ಈ ಬಾರಿ ಬಂಡವಾಳ ಹೂಡದೆ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾ?ಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಅನುಪಮ್ ಕೇರ್ ನಟನಾ ಶಾಲೆಯಲ್ಲಿ ತರಭೇತಿ ಪಡೆದುಕೊಂಡಿರುವ ವಿರೇಶ್ ಕೇಶವ್ ಈಗಾಗಲೇ ’ನರಗುಂದ ಬಂಡಾಯ’ ಮತ್ತು ’ಯುವರತ್ನ’ ಚಿತ್ರಗಳಲ್ಲಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಸದರಿ ಸಿನಿಮಾದ ಮೂಲಕ ನಾಯಕನಾಗಿ ಪರಿಚಯಗೊಳ್ಳುತ್ತಿದ್ದಾರೆ. ನಾಯಕಿ ಸೇರಿದಂತೆ ಇತರೆ ತಾರಗಣ ಆಯ್ಕೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಚಿತ್ರಕ್ಕೆ ಲೋಕಿ ಸಂಗೀತ, ರವಿವರ್ಮ ಛಾಯಾಗ್ರಹಣ, ಮೋಹನ್ ಸಂಕಲನ ವಿದೆ. ಅಂದಂಗೆ ಈ ಚಿತ್ರವನ್ನು ವಿಜಯಲಕ್ಷ್ಮೀ ಕಂಬೈನ್ಸ್ ಮುಖಾಂತರ ಡಾ.ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು ಹಾಗೂ ಮಡಕೇರಿ ಸುತ್ತಮುತ್ತ ಸುಂದರ ತಾಣಗಳಲ್ಲಿ ಜುಲೈ ಹದಿನೈದರಿಂದ ಚಿತ್ರೀಕರಣ ಶುರು ಮಾಡಲು ತಂಡವು ತಯಾರಿ ಮಾಡಿಕೊಂಡಿದೆ.

administrator

Related Articles

Leave a Reply

Your email address will not be published. Required fields are marked *