ಹುಬ್ಬಳ್ಳಿ-ಧಾರವಾಡ ಸುದ್ದಿ

’ತಾಜಮಹಲ್ 2’ ಧ್ವನಿಸುರುಳಿ ಬಿಡುಗಡೆ ನಾಳೆ

ಹುಬ್ಬಳ್ಳಿಯಲ್ಲಿ ಅದ್ಧೂರಿ ಪ್ರಿ ರಿಲೀಸ್ ಇವೆಂಟ್ – ಭರಪೂರ ಮನರಂಜನೆ

ಹುಬ್ಬಳ್ಳಿ : ಈಗಾಗಲೇ ಮೇಕಿಂಗ್ ಮೂಲಕ ಸುದ್ದಿ ಮಾಡುತ್ತಿರುವ ಶ್ರೀ ಗಂಗಾಂಬಿಕೆ ಎಂಟರ್‌ಪ್ರೈಸಸ್ ನಿರ್ಮಾಣ ತಾಜ್‌ಮಹಲ್2 ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಹಾಗೂ ಮೂರನೇ ಹಾಡಿನ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನಾಳೆ ನಗರದ ಬೆಂಗೇರಿ ಸ್ಮಾರ್ಟ್ ಸಿಟಿ ಮಾರ್ಕೆಟ್‌ನಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಚಿತ್ರದ ನಾಯಕ ನಟ ದೇವರಾಜಕುಮಾರ ಹಾಗೂ ಹಾಸ್ಯನಟ ರಿತೇಶ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಈ ವರ್ಣರಂಜಿತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಕೈಮಗ್ಗ ಮತ್ತು ಜವಳಿ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪಾಲ್ಗೊಳ್ಳಲಿದ್ದಾರೆಂದರು.
ಮುಖ್ಯ ಅತಿಥಿಗಳಾಗಿ ಸ್ವರ್ಣ ಸಮೂಹದ ಚೇರಮನ್ ಡಾ.ಚಿಗರುಪಾಟಿ ಮುಖ್ಯ ಅತಿಥಿಗಳಾಗಿ ವಿ.ಎಸ್.ವಿ.ಪ್ರಸಾದ,ಪಾಲಿಕೆ ಸದಸ್ಯರಾದ ಬೀರಪ್ಪ ಖಂಡೇಕರ,ರಾಜಣ್ಣ ಕೊರವಿ, ಪತ್ರಕರ್ತ ಗಣಪತಿ ಗಂಗೊಳ್ಳಿ, ಉದ್ಯಮಿ ರಮೇಶ ಮಹಾದೇವಪ್ಪನವರ, ಎಂಸಿಎ ನಿರ್ದೇಶಕ ವೀರೇಶ ಸಂಗಳದ,ವಿಜನ್‌ಪ್ಲೈ ಸಂಸ್ಥೆಯ ವೆಂಕಟೇಶ ಚಾಟೆ, ಅಂಜುಂ ಶೇಖ, ಉ.ಕ.ರಿಕ್ಷಾ ಚಾಲಕರ ಸಂಘದ ಶೇಖರಯ್ಯ ಮಠಪತಿ,ಡಾ.ಕಲ್ಮೇಶ ಹಾವೇರಿಪೇಟ ಮುಂತಾದವರು ಪಾಲ್ಗೊಳ್ಳಲಿದ್ದಾರೆಂದರು.

ಬಿಡುಗಡೆಗೊಳ್ಳಲಿರುವ ಹಾಡು ಶ್ರೀರಕ್ಷಾ ಪ್ರೀಯಾರಾಮ್ ಹಾಡಿದ್ದು, ಉತ್ತರ ಕರ್ನಾಟಕದ ಪ್ರತಿಭೆ ,ಚಿತ್ರದ ಸಹನಿರ್ದೇಶಕ ಮನ್ವರ್ಷಿ ನವಲಗುಂದ ರವರ ಸಾಹಿತ್ಯವಿದೆ.ಸ . 2ರಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತಾಜಮಹಲ್ ತೆರೆಕಾಣಲಿದ್ದು ಮನೆಮಂದಿಯೆಲ್ಲ ಕುಳಿತು ನೋಡುವ ಚಿತ್ರ ಇದಾಗಿದೆ ದೇವರಾಜಕುಮಾರ ಹೇಳಿದರು.

ಕಾರ್ಯಕ್ರಮವನ್ನು ರವೀಂದ್ರ ರಾಮದುರ್ಗಕರ ಸಾರಥ್ಯದ ಗಾನ ತರಂಗ ಸಂಸ್ಥೆ ಆಯೋಜಿಸಿದ್ದು, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಗಿ ಉತ್ತರ ಕರ್ನಾಟಕದ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆಂದರು. ಗೋಷ್ಠಿಯಲ್ಲಿ ಸಾಹಿತ್ಯ, ಸಂಭಾಷಣೆ ಅಲ್ಲದೇ ಸಹನಿರ್ದೇಶನ ಮಾಡಿರುವ ಮನ್ವರ್ಷಿ ನವಲಗುಂದ ಇದ್ದರು.


ಚಿತ್ರದ ತಾರಾಗಣದಲ್ಲಿ ಸಮೃದ್ಧಿ ಶುಕ್ಲಾ, ದೇವರಾಜ್ ಕುಮಾರ್, ರಿತೇಶ್, ಜಿಮ್ ರವಿ, ವಿಕ್ಟರಿ ವಾಸು, ಶೋಭರಾಜ್, ತಬಲಾನಾಣಿ, ಕಾಕ್ರೋಚ್ ಸುಧಿ, ಶಿವರಾಂ, ವಾಣಿಶ್ರೀ, ಲಕ್ಷ್ಮೀ ಸಿದ್ದಯ್ಯ ಮೊದಲಾವರಿದ್ದಾರೆ. ಛಾಯಾಗ್ರಹಣ ವಿನಸ್ ಮೂರ್ತಿ, ಸಂಗೀತ ವಿಕ್ರಂ ಸೆಲ್ವಾ, ಅವರದ್ದಿದ್ದರೆ, ವಿಜಯ್ ಪ್ರಕಾಶ್,ರಾಜೇಶ್ ಕೃಷ್ಣನ್, ವರ್ಷ ಬಿ ಸುರೇಶ್, ಶ್ರೀರಕ್ಷಾ, ಪ್ರಿಯಾರಾಮ್ ಹಾಡುಗಳನ್ನು ಹಾಡಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *