“ಪ್ರಕೃತಿ ಮುನಿಸು”
ಇಲ್ಲಿ ಎಲ್ಲವೂ ಅವನದೆ
ಕೊಡುವವನು ಅವನೆ
ಕೈ ಬಿಡುವವನು ಅವನೆ.
ಒಮ್ಮೆ ಮಳೆಯಾಗಿ
ಇನ್ನೊಮ್ಮೆ ರೌದ್ರಾವತಾರವಾಗಿ ಚಂಡಮಾರುತವಾಗಿ ಆರ್ಭಟಿಸುತ್ತಿರುವನು ಈಗ.
ವಿಜ್ಞಾನ ತಂತ್ರಜ್ಞಾನ ಏನೆ
ಇದ್ದರು ಮುನ್ಸೂಚನೆ ನೀಡಿದರು ಪ್ರಕೃತಿಯ ಮುಂದೆ ನಾವೆಲ್ಲರೂ ತೃಣಕ್ಕೆ ಸಮಾನ.
ವರ್ಷ ವರ್ಷವೂ ಹೆಚ್ಚುತ್ತಲಿದೆ
ಮಾರುತಗಳ ಅಬ್ಬರ ತಾಪಮಾನದ ಹೆಚ್ಚಳ.
ಆದರು ಪ್ರತಿ ಬಾರಿ ಅದೆಷ್ಟೋ ಜನ ಜಾನುವಾರು ಜೀವ ಬಲಿಯಾಗುತ್ತಿವೆ ಈ ದುರಂತಕ್ಕೆ
ವಿನಾಶಕಾಲೆ ವಿಪರಿತ ಬುದ್ಧಿ
ಮರೆಯೋಣ ಇನ್ನಾದರೂ ಪ್ರಕೃತಿ ಉಳಿಸೋಣ ಬೆಳೆಸೋಣ.
ಫಕ್ಕಿರೇಶ ಎಸ್ ಕಾಡಣ್ಣವರ