ಹುಬ್ಬಳ್ಳಿ-ಧಾರವಾಡ ಸುದ್ದಿ
ಸರಗೋಲು  ಆಟಕ್ಕೆ ಟಿಪ್ಪರ್ ಮಾಲಿಕ ಬಲಿ

ಸರಗೋಲು ಆಟಕ್ಕೆ ಟಿಪ್ಪರ್ ಮಾಲಿಕ ಬಲಿ

ಕ್ಷುಲ್ಲಕ ಕಾರಣಕ್ಕೆ ಜಗಳ -6 ಮಂದಿ ಅಂದರ್

ಶಿಗ್ಗಾವಿ : ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿಯ ವೇ ಬ್ರಿಜ್ ಹತ್ತಿರ ಸರಗೋಲು ಆಡುತ್ತಿದ್ದ ಆರು ಜನ ಹಾಗೂ ಟಿಪ್ಪರ್ ವಾಹನ ಮಾಲೀಕನ ನಡುವೆ ಶುರುವಾದ ಜಗಳ ಓರ್ವನ ಸಾವಿನಲ್ಲಿ ಅಂತ್ಯವಾಗಿದೆ.


ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಸದ್ಯ ಶಿಗ್ಗಾವಿ ಪಟ್ಟಣದ ಬಸವೇಶ್ವರ ನಗರದ ನಿವಾಸಿ ಉಮೇಶ್ ತಂದೆ ಶೇಖಯ್ಯ ಶಿವಜೋಗಿಮಠ( 45) ಮೃತ ದುರ್ದೈವಿಯಾಗಿದ್ದಾನೆ.
ನಿನ್ನೆ ಸಂಜೆ 6.30 ರ ಸುಮಾರಿಗೆ ಮೃತನು ಹಾಗೂ ತನ್ನ ಚಾಲಕನೊಂದಿಗೆ ಟಿಪ್ಪರ್ ಗಾಡಿಗೆ ಗ್ರೀಸಿಂಗ್ ಮಾಡುವಾಗ ಅಲ್ಲೇ ಸಮೀಪದಲ್ಲಿ ಸರಗೋಲು ಆಟವಾಡುತ್ತಿದ್ದರು.
ಈ ವೇಳೆ ಸರಗೋಲು ಉಮೇಶನ ಟಿಪ್ಪರ್‌ಗೆ ಬಂದು ಬಡಿದಿದ್ದು, ಆತ ಯಾರು ಹೊಡೆದಿದ್ದು ಎಂದು ಪ್ರಶ್ನಿಸಿದ್ದಾನೆ. ಆಗ ಜಗಳ ಶುರುವಾಗಿದೆ. ಆಟವಾಡುತ್ತಿದ್ದವರು ಐದಾರು ಜನ ಉಮೇಶ್ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಉಮೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.ತೀವ್ರ ಅಸ್ವಸ್ಥನಾದ ಆತನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತಪಟ್ಟಿದ್ದಾನೆ.


ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು 6 ಜನ ಆರೋಪಿಗಳಾದ ತಾಲೂಕಿನ ಜೇಕಿನಕಟ್ಟಿಯವರಾದ ಅಲಫಾಜ್, ಅಲಿ, ವಸೀಮ, ಜಾಫರ, ನೂರಿ ಹಾಗೂ ಖ್ವಾಜಾ ಇವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಈ ಕುರಿತು ಟಿಪ್ಪರ ಚಾಲಕ ಸಂತೋಷ್ ತಂದೆ ಬಸಪ್ಪ ಲಮಾಣಿ ಶಿಗ್ಗಾವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

 

 

administrator

Related Articles

Leave a Reply

Your email address will not be published. Required fields are marked *